Wednesday, July 20, 2011

Swalpa philosophy Swalpa Kavya!

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು , ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು
ವೆದಾಂತಿಯು ನಾನೇ ಕವಿಯು ನಾನೇ ಬದಲಾದದ್ದು ಮನದ ಆಂತರಿಕ ಕಣ್ಣು

ಹೆಣ್ಣು ಹೊನ್ನು ಮಣ್ಣು ಇವುಗಳ ಅನುಭವಿಸದೇ ಸಿಗುವುದೆಂತಹ ಮೋಕ್ಷ ?
ಕಾಣದ ಸುಖವ ಬಿಡುವುದರಲ್ಲೇನಿದೆ, ಎಲ್ಲವ ಕಂಡು ತ್ಯಜಿಸುವುದು ಲಕ್ಷ್ಯ

ಭಾವನೆಗಳ ತುಳಿದು ಭವ ಬಂಧನದೊಳು ಸಿಲುಕದೆ ದೇವರ ನೆನೆವುದೇ ಆಧ್ಯಾತ್ಮ?
ನಿತ್ಯ ಕಾಯಕವ ಮಾಡಿ ಪರರ ಸುಖದುಃಖಗಳಲ್ಲಿ ಭಾಗಿಯಾದೊಡೆ ಮೆಚ್ಚದಿರುವನೇ ಪರಮಾತ್ಮ?